ಮಂಗಳೂರು ನೆಕ್ಕಿಲ ಗುಡ್ಡೆ ಮಾಲೇಮಾರ್ ಬಳಿ ಇರುವ ರೇಣುಕಾ ಯೆಲ್ಲಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ , ಈ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ ದ ಪ್ರಯುಕ್ತ ಕುಂಭ ಮೆರವಣಿಗೆಯನ್ನ ಮಂಗಳೂರು ದೇರೆಬೈಲ್ ರಾಮ ಮಂದಿರದಿಂದ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತ್ತು.

ಈ ಕುಂಭ ಮೆರವಣಿಗೆಯಲ್ಲಿ ಕುಣಿತ ಭಜನೆ ,ಡೊಳ್ಳು ಕುಣಿತ ಆಕರ್ಷಣೆಯಾಗಿತ್ತು . ಸಹಸ್ರಾರು ಭಕ್ತರು ಈ ಕುಂಭ ಮೆರವಣಿಗೆಯಲ್ಲಿ ತಲೆಯಮೇಲೆ ಕುಂಭದ ಕಳಸವಿತ್ತು ಮೆರವಣಿಗೆ ಉದ್ದಕ್ಕೂ ಸಾಗಿ ಬಂದವು. ಉತ್ತರ ಕನ್ನಡ ಭಾಗದ ಜನರು ಮಂಗಳೂರಿಗೆ ಅನೇಕ ವರುಷಗಳಿಂದ ಕೆಲ್ಸಕೆಂದು ಬಂದು ಇಲ್ಲೇ ನೆಲೆಸಿದ್ದು ಮಂಗಳೂರು ನೆಕ್ಕಿಲ ಗುಡ್ಡೆ ಮಾಲೇಮಾರ್ ಬಳಿ ಇರುವ ರೇಣುಕಾ ಯೆಲ್ಲಮ್ಮ ದೇವಿ ದೇವಸ್ಥಾನ ಸ್ಥಾಪಿಸಿದ್ದಾರೆ . ವರ್ಷಪ್ರತಿ ಮಂಗಳೂರು ನೆಕ್ಕಿಲ ಗುಡ್ಡೆ ಮಾಲೇಮಾರ್ ಬಳಿ ಇರುವ ರೇಣುಕಾ ಯೆಲ್ಲಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ ನಡೆಯುತ್ತದೆ ,ಅದೇ ರೀತಿ ಈ ಬಾರಿಯೂ ನಡೆದಿದ್ದು ಉತ್ತರ ಕನ್ನಡ ದ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

Leave a Reply

Your email address will not be published. Required fields are marked *