ಕಡಬ:
ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ, ಹನುಮಾನ್ ನಗರ, ಕಡಬ (ದ.ಕ.) ಇಲ್ಲಿ 2025–26ನೇ ಶೈಕ್ಷಣಿಕ ವರ್ಷದ ಕನ್ನಡ ಸಂಘದ ಪ್ರಾಯೋಜಿತ ಮಕ್ಕಳ ಬರವಣಿಗೆಗಳ ಸಂಗ್ರಹ “ಕಣಜ” ಪುಸ್ತಕದ ಅನಾವರಣ ಕಾರ್ಯಕ್ರಮವು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸದಾಶಿವ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಯಶವಂತ ರೈ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದು, ಅವರು “ಕಣಜ” ಪುಸ್ತಕವನ್ನು ಅನಾವರಣಗೊಳಿಸಿದರು.
ಅವರು ಮಾತನಾಡಿ — “ಕನ್ನಡ ಭಾಷೆ ಒಂದು ಶ್ರೀಮಂತ ಮಾಧ್ಯಮ. ಆಂಗ್ಲ ಭಾಷೆಯ ಪ್ರಭಾವದಲ್ಲಿ ಕನ್ನಡ ತನ್ನ ಅಸ್ತಿತ್ವ ಕಳೆದುಕೊಳ್ಳಬಾರದು. ಮಕ್ಕಳು ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರಿನ ಸಹಕಾರ್ಯನಿರ್ವಹಣಾಧಿಕಾರಿ ಶ್ರೀ ವೆಂಕಟ್ರಮಣ ರಾವ್ ಮಂಕುಡೆ, ಸಂಸ್ಥೆಯ ಸಂಚಾಲಕ ಶ್ರೀ ಅಜಿತ್ ರೈ ಆರ್ತಿಲ, ಸರಸ್ವತೀ ವಿದ್ಯಾಲಯ ಪ್ರೌಢ ವಿಭಾಗದ ಮುಖ್ಯ ಮಾತಾಜಿ ಶ್ರೀಮತಿ ಶೈಲಶ್ರೀ ಎಸ್. ರೈ, ಆಂಗ್ಲ ಮಾಧ್ಯಮ ಮುಖ್ಯಗುರು ಶ್ರೀ ವಸಂತ ಕೆ., ಕನ್ನಡ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಪವಿತ್ರಾ ಎನ್. ಹಾಗೂ ಸಂಘದ ವಿದ್ಯಾರ್ಥಿ ಅಧ್ಯಕ್ಷ ಸುಮಂತ್ ಕೆ. (10ನೇ ತರಗತಿ) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸುಮಂತ್ ಕೆ. ಸ್ವಾಗತಿಸಿ, ವಿದ್ಯಾರ್ಥಿನಿ ಜಿ. ಶಾರ್ವರಿ ಬನ್ನಿಂತ್ತಾಯ (8ನೇ ತರಗತಿ) ವಂದಿಸಿ, ಭವಿಷ್ಯ ಕೆ. ಶೆಟ್ಟಿ (9ನೇ ತರಗತಿ) ನಿರೂಪಿಸಿದರು

