ಪುತ್ತೂರು: ಡಿಸೆಂಬರ್ 31ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ, ಉಡುಪಿ ಪರ್ಯಾಯ ಪೀಠವೇರಲಿರುವ ಶಿರೂರು ಸ್ವಾಮೀಜಿಗಳ ಪೌರ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ವಕೀಲರಾದ ನರಸಿಂಹ ಪ್ರಸಾದ್, ಗೌರವಾಧ್ಯಕ್ಷರುಗಳಾದ ಯು. ಪೂವಪ್ಪ, ಡಾ. ಸುರೇಶ್ ಪುತ್ತೂರಾಯ, ಕುಂಟಾರು ಗುರು ತಂತ್ರಿಗಳು, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಉಮೇಶ್ ನಾಯಕ್, ಕೋಶಾಧಿಕಾರಿ ವೆಂಕಟ್ರಮಣ ಕಡಬ, ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀನಿವಾಸ್, ಶುಭಾಷ್ ರೈ ಬೆಳ್ಳಿಪ್ಪಾಡಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಇದಲ್ಲದೆ ಬಿಜೆಪಿ ಪ್ರಮುಖರಾದ ಸಾಜಾ ರಾಧಾಕೃಷ್ಣ ಆಳ್ವ, ಹರಿಪ್ರಸಾದ್ ಯಾದವ್, ವಿದ್ಯಾಧರ ಜೈನ್, ನಿತೇಶ್ ಶಾಂತಿವನ, ಶಶಾಂಕ್ ಕೋಟೆಚಾ, ಭೀಮ್ ಭಟ್, ರವಿ ಆಚಾರ್ ಸಂಪ್ಯ, ಶ್ರೇರಾಮ್ ಭಟ್ ಪಾತಾಜೆ, ಅನಿಲ್ ತೆಂಕಿಲ, ರವಿಶಂಕರ್ ವಿಟ್ಲ, ಅನಂತ ಪ್ರಸಾದ್ ವಿಟ್ಲ, ಪ್ರಶಾಂತ್ ನೆಕ್ಕಿಲಾಡಿ, ರವಿಕುಮಾರ್ ಕಾವು, ಎ.ವಿ. ನಾರಾಯಣ – ವಿವೇಕಾನಂದ ವಿದ್ಯಾವರ್ಧಕ ಸಂಘ, ಶ್ಯಾಮ್ ನಗರ, ಶ್ರೀಮತಿ ವತ್ಸಲಾ ರಾಜ್ನಿ, ಪ್ರೇಮಾ ರೈ, ಸ್ಮಿತಾ ನಾಯ್ಕ್, ಅನ್ನಪೂರ್ಣ ಸಿ. ರಾವ್, ಚಂದ್ರಶೇಖರ್ ಆಳ್ವ, ವಿಶ್ವನಾಥ ಬಾಲ್ಯಯ, ಸುಧೀರ್ ಕಲ್ಲೇಗ, ರಾಜು ವಿ. ಶೆಟ್ಟಿ, ಪ್ರವೀಣ್ ತಿಂಗಳಾಡಿ, ಸಂದೇಶ್ ಕೆಯ್ಯುರು, ಅನಿಲ್ ಕಣ್ಣಾರ್ನೋಜಿ, ರೂಪೇಶ್ ನಾಯ್ಕ್, ಹರೀಶ್ ಪೂಜಾರಿ ಮರುವಾಳ, ಅಶೋಕ್ ಪುತ್ತಿಲ, ಬಾಲಕೃಷ್ಣ ರೈ ಮುಂಡೂರು, ಸುಜಿತ್ ಕಜೆ, ಗಣೇಶ್ ಭಟ್ ಮಕರಂದ, ಬಾಲಕೃಷ್ಣ ಗೌಡ, ವಸಂತ ನಾಯ್ಕ್, ರವಿ ಕೃಷ್ಣನಗರ, ಶ್ರೀಧರ ಬೈಪಾಡಿತ್ತಾಯ, ಸತೀಶ್ ಕೆದಿಲಾಯ, ಪ್ರದೀಪ್ ಶಾಂತಿಗೋಡು, ಶ್ರೀಕಾಂತ್ ಆಚಾರ್, ಅರುಣ್ ಭಟ್ ನಗರ, ಸಂತೋಷ್ ಪಂಜಳ, ಪ್ರಕಾಶ್ ಕೊಡಿಪ್ಪಾಡಿ, ಕಿಶೋರ್ ನಗರ, ಪ್ರಕಾಶ್ ಉರ್ಲಾಂಡಿ, ಸುಧೀರ್ ಕಲ್ಲಾರೆ, ರಿತೇಶ್ ಪಾಟಾಲಿ, ಸಚಿನ್ ಒಳಮೊಗ್ರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




ಡಿಸೆಂಬರ್ 31ರಂದು ನಡೆಯಲಿರುವ ಪೌರ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುವಂತೆ ಕಾರ್ಯಕ್ರಮದ ಸಂಘಟಕರು ಮನವಿ ಮಾಡಿದರು.




