ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ಹಿನ್ನೆಲೆಯಲ್ಲಿ ಕಡಬ ತಾಲೂಕು ಯುವ ಏಕತಾ ಸಮಾವೇಶವು ನವೆಂಬರ್ 23 2025 ನೇ ಆದಿತ್ಯವಾರ ರಂದು ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು, ರಾಮಕುಂಜ ಇಲ್ಲಿ ನಡೆಯಲಿದೆ.
ಈ ಪ್ರಯುಕ್ತ ಯುವ ಏಕತಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಕಡಬದ ಯುವ ಉದ್ಯಮಿ ಅಶ್ವಿನಿ ಹಾರ್ಡ್ ವೇರ್ ಇದರ ಮಾಲೀಕರಾದ ಶ್ರೀ ಗಿರೀಶ್ ಕುಮಾರ್ ಇವರು ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾದ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ನಂದುಗುರಿ, ರಕ್ಷಿತ್ ಕೇಪು, ಸುಖೇಶ್ ಕುಮಾರ್, ಭಾ.ಜ.ಪ ಜಿಲ್ಲಾ ಯುವ ಮೋರ್ಚ ಶ್ರೀ ಕೃಷ್ಣಕುಮಾರ್, ಮುತ್ತುಕುಮಾರ್, ಕಾಶಿನಾಥ್ ಗೋಗಟೆ, ಕಾರ್ತಿಕ್ ಪಿಜಕ್ಕಳ, ಮೋಹನ್ ಕೆರೆಕೋಡಿ, ರಚನ್ ರೈ ,ಸಚಿನ್ ಪಟ್ನಾ, ದೀಪಕ್,ನವೀನ್, ದೀಕ್ಷಿತ್, ಅಕ್ಷಯ್, ಉಪಸ್ಥಿತರಿದ್ದರು. ಮಾದವ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.


