ಪುತ್ತೂರು: ವರ್ತಕರ ಸಂಘ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿ ಪುರುಷರಕಟ್ಟೆ, ಪುತ್ತೂರು ದ.ಕ. (VSNP) ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಕಾರ್ಯಕ್ರಮವು ಫೆ.15ರಂದು‌ ನರಿಮೊಗರು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ.

ವರ್ತಕರ ಸಂಘದ ನಿಯೋಜಿತ ಅಧ್ಯಕ್ಷರಾದ ನವೀನ್ ಪ್ರಭು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ವಾಮನ ಪೈಯವರು ಉದ್ಘಾಟಿಸಲಿದ್ದಾರೆ.

ಇನ್ನು ಕಾರ್ಯಕ್ರಮದ ಅಭ್ಯಾಗತರಾಗಿ ನರಿಮೊಗರು ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾರು ಮಧುಕರ ಆಚಾರ್ ಹಿಂದಾರ್, ಸರಸ್ವತಿ
ವಿದ್ಯಾಮಂದಿರ ಪುರುಷರಕಟ್ಟೆ ಇದರ ಸಂಚಾಲಕರಾದ ಅವಿನಾಶ್ ಕೊಡಂಕೀರಿ, ಡಾ| ಕೆ. ಶಂಕರ್ ಪುರುಷರಕಟ್ಟೆ, MBBS, ಸಿಎ ಎಸ್.ಎಸ್. ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *