ಕುಮಟಾ: ಬೈಕ್ನಲ್ಲಿ ದನದ ಮಾಂಸ ಹಾಗೂ ಹರಿತ ಆಯುಧಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ತಾಲ್ಲೂಕಿನ ಸಂತೆಗುಳಿ ಗ್ರಾಮದ ಹಿಂಡಬೈಲ್ ಬಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರಿಂದ 35 ಕೆ.ಜಿ. ದನದ ಮಾಂಸ ಹಾಗೂ ಕತ್ತಿ, ಚಾಕು ಮುಂತಾದ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.



ಆರೋಪಿಗಳನ್ನು ಸಂತೆಗುಳಿ ಗ್ರಾಮದ ಬಾಬು ಯಾನೆ ಆಶ್ರಫ್ ಜಕ್ರಿಯಾ ಖಾಜಿ, ಫಕೀರಸಾಬ್ ಜಮಾಲ್ ಸಾಬ್, ಗೌಸ್ ಅಬ್ದುಲ್ ರೆಹಮಾನ್ ಹಾಗೂ ಷರೀಫ್ ಸಾಬ್ ಎಂದು ಗುರುತಿಸಲಾಗಿದೆ.




