ಕಡಬ: ಕೋಡಿಂಬಾಳ ನಿವಾಸಿ ಅಜಿತ್ ಕೆ ಅವರು ಕೋಯಂಬತ್ತೂರಿನ ಭಾರತೀಯ ವಿಶ್ವವಿದ್ಯಾಲಯದಿಂದ (Bharathiar University) ಪ್ರತಿಷ್ಠಿತ ಡಾಕ್ಟರ್ ಆಫ್ ಫಿಲಾಸಫಿ (ಪಿ.ಹೆಚ್.ಡಿ) ಪದವಿಯನ್ನು ಪಡೆದುಕೊಂಡಿದ್ದಾರೆ.
ಅವರು ಮಂಡಿಸಿದ “ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಗಾಗಿ ಆಹಾರ ಕ್ರಮದ ಮಧ್ಯಸ್ಥಿಕೆ ಮತ್ತು ಜೀವನಶೈಲಿ ಮಾರ್ಪಾಡು – ಒಂದು ಪ್ರಾಸ್ಪೆಕ್ಟಿವ್ ಅಧ್ಯಯನ” (Dietary Intervention and Lifestyle Modification for Polycystic Ovary Syndrome – A Prospective Study) ಎಂಬ ಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಕೋಯಂಬತ್ತೂರಿನ ಡಾ. ಎನ್.ಜಿ.ಪಿ ಕಾಲೇಜಿನ ಪ್ರೊಫೆಸರ್ ಡಾ. ಮೀರಾ ರಮನ್ ಅವರು ಅಜಿತ್ ಅವರ ಈ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು.






ಅಜಿತ್ ಕೆ ಅವರು ಪ್ರಸ್ತುತ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ತಜ್ಞರಾಗಿ ಹಾಗೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸಂಶೋಧನೆಯ ಮೂಲಕ ಮಹಿಳೆಯರ ಆರೋಗ್ಯಕ್ಕೆ ಪೂರಕವಾದ ಜೀವನಶೈಲಿ ಬದಲಾವಣೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ.
ಇವರು ಕಡಬದ ಎಸ್ಸಿಡಿಸಿಸಿ ಬ್ಯಾಂಕ್ನ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ಕುಸುಮಾಧರ ಗೌಡ ಕೆ. ಕೋಡಿಂಬಾಳ (ಕೊಡಂಕೇರಿ) ಹಾಗೂ ಪದ್ಮಾವತಿ ದಂಪತಿಗಳ ಪುತ್ರರಾಗಿದ್ದಾರೆ. ಇವರ ಪತ್ನಿ ಅಶ್ಮಿತಾ ಎನ್.ಎಂ ಅವರು ಮಂಗಳೂರು ಜಿಲ್ಲಾ ಪಂಚಾಯತ್ನಲ್ಲಿ ಪ್ರೊಕ್ಯೂರ್ಮೆಂಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಜಿತ್ ಕೆ ಅವರ ಈ ಶೈಕ್ಷಣಿಕ ಸಾಧನೆಗೆ ಗಣ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.



